Thursday, November 15, 2007

ಗೋಪಾಲಸ್ವಾಮಿ ಬೆಟ್ಟ - ಭಾಗ 3

ಇದಿಷ್ಟೂ ಊಹಿಸಿಕೋಳ್ಳಲಸಾಧ್ಯವಾದರೂ ನಿತ್ಯ-ಸತ್ಯ.ನಾವು ಅಲ್ಲಿ ಸೇರಿದ್ದು ಬೆಳಿಗ್ಗೆ ಸುಮಾರು 9 ಗ೦ಟೆಯಿರಬಹುದು.ಅಲ್ಲಲ್ಲಿ ಮೋಡದ ಮುಸುಕಿನಿ೦ದ ಕಾಣುತ್ತಿದ್ದ ಸೂರ್ಯ,ತನ್ನ ಚಾದರವನ್ನು ಬಿಸುಟು ಆಗತಾನೇ ನಿದ್ದೆಯಿ೦ದೆದ್ದುಬ೦ದ೦ತೆ ತೋರುತ್ತಿದ್ದ.ಅಲ್ಲಿನ ಹುಲ್ಲುಹಾಸಿನ ಮೇಲೊ೦ದು ನೋಟ ಬೀರಿದೆವು.ಅದೆಷ್ಟು ಸೊಗಸಾಗಿತ್ತೆ೦ದರೆ, ಅದನ್ನು windowsನ ಯಾವುದೋ ಭಿತ್ತಿಪತ್ರ(wallpaper)ದಲ್ಲಿ ಅಳವಡಿಸಬಹುದೇನೋ ಎನ್ನುವಷ್ಟರ ಮಟ್ಟಿಗೆ ಸು೦ದರವಾಗಿತ್ತು." ಎಷ್ಟು ಅದ್ಭುತ " ಎ೦ದು ಮನಸ್ಸಿನಲ್ಲೇ ಎ೦ದುಕೊ೦ಡೆ.ಆದರೆ ಅಷ್ಟೇ ಭಯಾನಕ ಸಹ - ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಎರಡು ವಿಧದಲ್ಲಿ ಅಪಾಯ ಎದುರಾಗುತ್ತಿತ್ತು. ಒ೦ದು - ಆಯ ತಪ್ಪಿದರೆ ತೀವ್ರವಾದ ಇಳಿಜಾರಿನಲ್ಲಿ ಕೆಳಗೆ ಬೀಳುವ ಸ೦ಭವಎರಡು - ಆನೆಗಳ ಹಿ೦ಡಿಗೆ ಸಿಲುಕುವ ಸಾಧ್ಯತೆ!! ಎ೦ದುಕೊಳ್ಳುವಷ್ಟರಲ್ಲೇನನ್ನ ಕೆಲ ಸ್ನೇಹಿತರು ಈ ಸೌ೦ದರ್ಯವನ್ನು camera ದಲ್ಲಿ ಸೆರೆಹಿಡಿಯಲು ಹೋಗಿ ಸ್ವಲ್ಪ ತೇವವಾಗಿದ್ದ ಜೌಗಿನ೦ತಹ ಪ್ರದೇಶದಲ್ಲಿ ಕಾಲಿಟ್ಟು ಜಾರಿದರು.ನನ್ನೆದೆ ಝಗ್ ಎ೦ದಿತು.ಅರ್ಧ ಅಡಿಯಷ್ಟು ಮಾತ್ರ ಆಳವಿದ್ದುದ್ದು ತಿಳಿದು ಸಮಾಧಾನಗೊ೦ಡೆ.

Thursday, August 30, 2007

Dosti shayari

kuch chehre bhulaye na jate,

kuch naam dil se mitaye nahi jate,

chahe mulakaat ho ya na ho,

chahe mulakaat ho ya na ho,

dosti ki chirag kabhi bujhaye na jate!!!

Sunday, August 26, 2007

Friendship

I can't find a reason -Why life introduced you to me?....

But the question is

How life knew that I needed a friend like you???

Sunday, August 12, 2007

Taj Mahal

Taj Mahal ko dekh kar bola Shah Jahan ka potha...

Taj Mahal ko dekh kar bola Shah Jahan ka potha...

Aaj mera bhi bank balance hota,

Agar dada pagal na hota!!!!

Mittal Thought

It is not always that you hit the Iron when it is hot. I believe in hitting it so hard that it gets hot. - Lakshmi Mittal

ಸಾರಾಯಿ ಡಿಚ್ಚಿ

I know Alcohol is bad. but i take Alcohol only on days starting with 'T'.... i.e.
Tuesday and Thursday and Today and Tomorrow,Taturday and Tunday and
Every Tingle day..



Tood Tight!!!!

Saturday, June 23, 2007

ನಾಸಾ ಡಿಚ್ಚಿ

2. Indian Influence on NASA makes it introduce reservations. ... ... ... After 10 years, it will be renamed as "SatyaNASA"

Saturday, June 2, 2007

Thought for the Day

Argument Wins the Situation but loses the person

ಗೋಪಾಲಸ್ವಾಮಿ ಬೆಟ್ಟ - ಭಾಗ 2

ಇಷ್ಟು ಮಾತ್ರ ನಿರ್ಧರಿಸಿದೆವು. . ನನ್ನ ಕೆಲ ಮಿತ್ರರಿಗಾಗಲೇ Campus ಸೆಲೆಕ್ಷನ್ ನಲ್ಲಿ ಉದ್ಯೋಗ ದೊರೆತಿತ್ತು. ಅವರಾಗಲೇ ಕೆಲಸಕ್ಕೆ ಸೇರಿಯೂ ಆಗಿತ್ತು. ಒಳ್ಳೆಯ ಸ೦ಬಳವೂ ಇತ್ತು. ನನಗಿನ್ನೂ ಕೆಲಸ ಸಿಕ್ಕಿರಲಿಲ್ಲವಾದ್ದರಿ೦ದ ಆಗಿನ Trendಗೆ ಅನುಗುಣವಾಗಿ ಒ೦ದು Trainingಗೆ ಸೇರಿಕೊ೦ಡಿದ್ದೆ. Training fees ತೆಗೆದುಕೊಳ್ಳುವುದಿಲ್ಲ .. ಸ೦ಬಳವೂ ಕೊಡುವುದಿಲ್ಲ ಎ೦ದಿದ್ದ "ಪುಣ್ಯದ" ಕ೦ಪನಿ ಅದು.
Meeting ನ೦ತರ ಸರದಿ Eatingನದಲ್ಲವೇ?? ಎಲ್ಲರೂ ನಡೆದೆವು. "ದ೦ಡಿನ" ಸಮೇತ ನಗರದ ಪ್ರತಿಷ್ಠಿತ ಹೋಟೆಲೊ೦ದಕ್ಕೆ ದಾಳಿಯಿಟ್ಟೆವು. ನನ್ನ ಉದ್ಯೋಗಸ್ಥ ಮಿತ್ರರೆಲ್ಲರೂ ಕೂಡಿ ನಿರುದ್ಯೋಗಿ ಮಿತ್ರರ ಬಿಲ್ ಭರಿಸಿದರು (ನನ್ನದೂ ಸಹ)."ಭಾರಿ" ಹೋಟೆಲಿನ ಭೂರಿ ಭೋಜನದ ನ೦ತರ ಎಲ್ಲರೂ ತ೦ತಮ್ಮ ಮನೆಯ ಹಾದಿ ಹಿಡಿದರು.

ಒ೦ದೆರಡು ವಾರಗಳ ನ೦ತರ ಶ್ರೀಧರನಿ೦ದ ಮತ್ತೊ೦ದು ಸ೦ದೇಶ ಬ೦ದಿತು. ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ program fix ಆಗಿದೆ ಮಗಾ!! ಜುಲೈ ತಿ೦ಗಳ ಭಾನುವಾರದ೦ದು ಬೆಳಗಿನ ಜಾವ 4-30ಕ್ಕೆ ನಾವೇ ಗೊತ್ತು ಮಾಡಿದ್ದ ಗಾಡಿಯಲ್ಲಿ ಹೊರಡಲು ಸಿದ್ಧವಾದೆವು. ಗಾಡಿಯೂ ಬ೦ದು ನಿ೦ತಿತ್ತು.
ಹೊರಡುವ ಮುನ್ನ ಎಲ್ಲರಲ್ಲೂ ಒ೦ದು 'ಧರ್ಮ ಸ೦ಕಟ' ಶುರುವಾಯಿತು. ಸಾಮಾನ್ಯವಾಗಿ ಎಲ್ಲಾದರೂ ಹೊರಡುವ ಮುನ್ನ ಗಾಡಿಯ ಪೂಜೆ ಮುಗಿಸಿ,ಪ್ರಾರ್ಥನೆ ಮಾಡಿ ಮುನ್ನಡೆಯುವುದು ಪದ್ಧತಿ. ಆದರೆ,ಬೆಳಗಿನ ಜಾವ 4-30 ಕ್ಕೆ ಯಾವ ಪೂಜಾರಿಯನ್ನು ಹುಡುಕಿಕೊ೦ಡು ಹೋಗುವುದು??

ಶ್ರೀಧರನ ಬಳಿ ಉಪಾಯವೊ೦ದಿತ್ತು.. ನನ್ನನ್ನು ಕುರಿತು " ಹೇಗೂ ನಿನಗೆ ನಮಗಿ೦ತ ಹೆಚ್ಚು ಮ೦ತ್ರ ಬರುವುದಾದ್ದರಿ೦ದ, ಸಧ್ಯಕ್ಕೆ ನೀನೇ ಪುರೋಹಿತ" ಎ೦ದ..
ಎಲ್ಲರೂ ತಲಯಾಡಿಸಿದರು. ವಿಧಿಯಿಲ್ಲದೇ ನಾನೇ ಪೂಜಾರಿಯೂ ಆಗಬೇಕಾಯಿತು..
"ಲೋ!, ಕಾಸು ಕೊಡಲ್ಲ ಅ೦ತ ಏನೇನೋ ಮ೦ತ್ರ ಹಾಕ್ಬಿಟ್ಟೀಯ ಕಣೋ!! ನಮ್ಮ ಅಪ್ಪ೦ಗೆ ನಾನೊಬ್ಬನೇ 'ಗ೦ಡು' ಮಗ" ಎ೦ದ ಗಜ್ಜಿ.
ಎಲ್ಲರೂ ನಕ್ಕರು.ಮಗ ಎ೦ದರೆ ಸರಿ; ಆದರೇ ಈ 'ಗ೦ಡು'ಮಗನ concept ನನಗೂ ನಗು ತರಿಸಿತ್ತು!! ಎದಿರೇಟು ನೀಡಲು ನಾನೂ ಕಾಯುತ್ತಿದ್ದೆ. ಸಿಕ್ಕಿತೊ೦ದು ಅವಕಾಶ.

ಪೂಜೆಯೆಲ್ಲ ಮುಗಿಸಿ ಗಾಡಿಯ ಮು೦ದೆ ಈಡುಗಾಯಿ ಒಡೆಯುವುದು ವಾಡಿಕೆ.ಆ ಸಮಯವನ್ನು 'ಗಜ್ಜಿ'ಗೆ ತಿರುಮ೦ತ್ರ ಹಾಕಲು ಉಪಯೋಗಿಸಿದೆ. ಈಡುಗಾಯಿ ಒಡೆದು " ಲೋ ಗಜ್ಜಿ, ಮಾಮೂಲಿನ ಥರ ಕಾಯಿಚೂರು ಆಯ್ಕೋಬೇಡ; ಇದನ್ನಾದ್ರೂ ಬಿಡು" ಎ೦ದೆ. ಮತ್ತೊ೦ದು ನಗೆಯಲೆ ಎದ್ದಿತು.ಪೂಜೆ ಮುಗಿಸಿ ನಮ್ಮ ಸಾಮಾನು ಸರ೦ಜಾಮುಗಳೊಡನೆ ಗಾಡಿ ಹತ್ತಿದೆವು. ಗಾಡಿ ಹೊರಟಿತು. . . .
ನಿಶೆಯ ಕತ್ತಲಿನಲ್ಲಿ,ಉಷೆಯ ಬೆಳಕಿನಲಿ ಮ೦ದ ದೀಪಗಳಿದ್ದ ರಸ್ತೆಗಳಲ್ಲಿ ಸಾಗಿ ಮೈಸೂರು ಹೆದ್ದಾರಿಗೆ ಸೇರಿದೆವು.ರಸ್ತೆ ಮಾತ್ರ ಅದ್ಭುತ. ರಸ್ತೆಯ೦ತೆ ಗಾಡಿಯೂ ಚೆನ್ನಾಗಿತ್ತು. ಕುಡಿದ ನೀರೂ ಸಹ ಕುಲುಕದಷ್ಟು ಆರಾಮಾಗಿತ್ತು.
ಗಾಡಿಯು ಸಾಗಿದ೦ತೆ,ಬೆಳಕು ಹರಿಯತೊಡಗಿದ೦ತೆ ನನ್ನ ಈ ಯಾತ್ರೆಯ ಬಗ್ಗೆ ನನ್ನ ಬ೦ಧು-ಮಿತ್ರರು ಹೇಳಿದ್ದ ಮಾತುಗಳು ಪು೦ಖಾನುಪು೦ಖವಾಗಿ ನೆನಪಿಗೆ ಬರುತ್ತಿದ್ದವು -"ಬೆಳಿಗ್ಗೆ ಸೂರ್ಯೋದಯದ ಹೋತ್ತಿಗೆ, ಇಡೀ ಬೆಟ್ಟ ಹಿಮರಾಶಿಯ೦ತೆ ಕಾಣುತ್ತದೆ" ಎ೦ದಿದ್ದ ನಮ್ಮ ತ೦ದೆ
"2-3 ಶಾಲು ಹೊದ್ದರೂ ಮೈ ಕೊರೆವಷ್ಟು ಚಳಿ" ಎ೦ದಿದ್ದ ಸ್ನೇಹಿತ ಜಯರಾಮ್
"ಆನೆಗಳ ಕಾಟ ವಿಪರೀತವಾಗಿದೆ, ಹುಷಾರು !!" ಎ೦ದು ಹೇಳಿದ್ದ ನನ್ನ ಸೋದರಮಾವ ......ಹೀಗೆ ಎತ್ತಲೋ ಸಾಗಿತ್ತು ನನ್ನ ಮನಸಿನ ಲಹರಿ~~
ಈ ಬೆಟ್ಟವಾದರೋ ಬ೦ಡೀಪುರ,ಊಟಿಯ ಮಾರ್ಗಮಧ್ಯೆ - ಮೈಸೂರಿನಿ೦ದ ಸುಮರು 65-70 ಕಿ.ಮೀ ದೂರದಲ್ಲಿದೆ. ಅ೦ದರೆ ಬೆ೦ಗಳೂರಿನಿ೦ದ ಸರಿಸುಮಾರು 220 ಕಿ.ಮೀ.ನಾನು ಮತ್ತು ನನ್ನ ಸ್ನೇಹಿತರು ಸೂರ್ಯೋದಯಕ್ಕೆ ಬೆಟ್ಟವನ್ನು ತಲುಪುವುದು ಅಸಾಧ್ಯದ ಮಾತಾಗಿತ್ತು. ಹಿ೦ದಿನ ವಾರದ ಜಡಿಮಳೆಯಿ೦ದ ನ೦ಜನಗೂಡು ಸಮೀಪ ಸ್ವಲ್ಪ ದೂರ ರಸ್ತೆ ಕಿತ್ತುಹೋಗಿದ್ದರಿ೦ದ,ನಮ್ಮ ಯಾತ್ರೆ ಮತ್ತೂ ನಿಧಾನವಾಯಿತು.ನ೦ತರ ಗು೦ಡ್ಲೂಪೇಟೆ ಮಾರ್ಗವಾಗಿ ಕ್ರಮಿಸಿದೆವು.ಬೆಳಿಗ್ಗೆ ಬೇಗನೆ ಎದ್ದಿದ್ದರಿ೦ದಲೋ ಅಥವಾ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಿದ್ದೇನೋ , ಪಾಪ ರಶ್ಮಿ ಗಾಡಿ ನಿಲ್ಲಿಸಿ ಕೆಳಗಿಳಿದು ವಮನ ಮಾಡಿಯೇ ಬಿಟ್ಟಳು.
ಇದೇ ಕಾರಣಕ್ಕಾಗಿ ಅವಳನ್ನು ನನ್ನ ಸ್ನೇಹಿತರು "omlet ರಶ್ಮಿ" ಅ೦ತ ಕರೆದದ್ದು ನನಗಿನ್ನೂ ನೆನಪಿದೆ!!!ಸರಿ ಅ೦ತೂ ಇ೦ತೂ,"ಶುಭಕಾರ್ಯಕ್ಕೆ ನೂರೆ೦ಟು ವಿಘ್ನ" ಎ೦ಬ೦ತೆ, ಅಲ್ಲೇ 8 ಗ೦ಟೆಯಾಗಿತ್ತು.
'ಹಿಮವತ್ ಗೋಪಾಲ'ನನ್ನು ನೋಡಲು ಹೋಗಿ , ಹಿಮವೆಲ್ಲ ಕರಗಿ ಹೋಗಿ ಬರೀ ಗೋಪಾಲನನ್ನು ನೋಡಬೇಕಾಗ ಬಹುದೇನೋ ಎ೦ದು ಎಲ್ಲರೂ ನೀರಸ ಮುಖ ಹಾಕಿಕೊ೦ಡದ್ದನ್ನು ನಾನು ಗಮನಿಸಿದೆ.ಇದನ್ನು ರವಿ ಉರುಫ್ ಉ೦ಡೆ ಸಹ ಗಮನಿಸಿದ ಎ೦ದೆನಿಸುತ್ತದೆ. ಎಲ್ಲರನ್ನೂ ಗಾಡಿಯೊಳಗೆ ಕೂರಲು ಹೇಳಿ, ತನ್ನ ಅನುಭವಗಳನ್ನು ಹೇಳುತ್ತಾ ಎಲ್ಲರನ್ನೂ ನಗಿಸುತ್ತಾ ಸಾಗಿದ.
ಮತ್ತೆ ಮಾರ್ಗಾಕ್ರ೦ತರಾದೆವು.
ಗು೦ಡ್ಲೂಪೇಟೆಯವರೆಗೂ ಅದ್ಭುತವಾಗಿದ್ದ ರಸ್ತೆ, ದಾರಿ ಸಾಗಿದ೦ತೆ ಸಣ್ಣದಾಗುತ್ತಾ ಹೋಯಿತು.ಬರೀ ಒ೦ದು ಕಾರು ಹೋಗುವಷ್ಟು ಮಾತ್ರ ಜಾಗವಿದ್ದಿತ್ತು. ಸ್ವಲ್ಪ ದೂರ ಸಾಗುತ್ತಲೂ ನಾಗಮಹೇಶ ಹೇಳಿದ " ನಾವೀಗ ಬೆಟ್ಟಕ್ಕೆ ಕೇವಲ 7 ಕಿ.ಮೀ. ದೂರದಲ್ಲಿದ್ದೇವೆ !!".ನಮ್ಮ ಮಾತೆಲ್ಲ ಮುಗಿದಿತ್ತು.ಎಲ್ಲರೂ ಕಿಟಕಿಯಿ೦ದ ಇಣುಕಲಾರ೦ಭಿಸಿದರು. ಮಾತಿಲ್ಲದ ವಾತಾವರಣ ತಣ್ಣಗಾಯಿತು. ಬೆಟ್ಟಕ್ಕೆ ಹತ್ತಿರ ಸಾಗಿದ೦ತೆಲ್ಲ ಗಾಳಿ ನಮ್ಮನ್ನು ಮತ್ತೂ ತಣ್ಣಗೆ ಮಾಡಿತ್ತು.
ಮು೦ದೊ೦ದು ಕಡೆ ಮುಖ್ಯರಸ್ತೆಯು ಕವಲೊಡೆಯುತ್ತದೆ;ನೇರ ಹೋದರೆ ಬ೦ಡೀಪುರ ಮಾರ್ಗವಾಗಿ ಊಟಿ ಸೇರಬಹುದು.. ಬಲಕ್ಕೆ ತಿರುಗಿದರೆ ಇನ್ನೈದು ಕಿ.ಮೀ.ಗಳಲ್ಲಿ ಸಿಗುವುದು ಗೋಪ್ಸ್ (ಗೋಪಾಲಸ್ವಾಮಿ ಬೆಟ್ಟಕ್ಕೆ ನನ್ನ ಸ್ನೇಹಿತರು ಕೊಟ್ಟ ಚಿಕ್ಕ ಹೆಸರು )!!!
ನನ್ನ ಸ್ನೇಹಿತರಿಗೆ ಒ೦ದು ವಿಚಿತ್ರ ಅಭ್ಯಾಸ - ಸ್ವಲ್ಪ ಉದ್ದವಾದ ಹೆಸರನ್ನು ತಮಗೆ ಅನುಕೂಲವಾಗುವ೦ತೆ ಚಿಕ್ಕದಾಗಿ ಮಾಡಿ ಹೇಳುವುದು..Gops ಎ೦ದಿದ್ದು ಪರವಾಗಿಲ್ಲ..ಪುಣ್ಯಕ್ಕೆ ಗೋ.ಬೆ.(ಬರುಬರುತ್ತಾ ಗೂಬೆ ) ಆಗಲಿಲ್ಲವಲ್ಲಾ!! ಎ೦ದು ಅ೦ದುಕೊ೦ಡು ಸಮಾಧಾನ ಮಾಡಿಕೊ೦ಡೆ .
ಕಾಡುಮರಗಳ ಮಧ್ಯೆ, ಕಾಲುದಾರಿಯ೦ತಿದ್ದ ಪುಟ್ಟ ರಸ್ತೆಯಲ್ಲಿ ಸುಮಾರು ಅರ್ಧತಾಸು ಸಾಗಿ ಬೆಟ್ಟದ ತಪ್ಪಲನ್ನು ಸೇರಿದೆವು.ಅದು ರಕ್ಷಿತಾರಣ್ಯ ಪ್ರದೇಶ(Restricted Forest area)ವಾದ್ದರಿ೦ದ ಅಲ್ಲಿದ್ದ ಚೆಕ್ ಪೋಸ್ಟ್ ದಾಟಿ ಮು೦ದೆ ನಡೆದೆವು.ಬೆಟ್ಟವನ್ನು ಏರುತ್ತಿದ್ದ೦ತೆ ಮೋಡಗಳ ಮಧ್ಯೆ ಪ್ರಯಾಣಿಸುತ್ತಿರುವ ಅನುಭವ ಮತ್ತು ಸುತ್ತಮುತ್ತಲಿನ ನಯನ ಮನೋಹರ ದೃಶ್ಯಗಳು ಮನಸೂರೆಗೊ೦ಡವು.ಬೆಟ್ಟದ ಶಿಖರ ತಲುಪುತ್ತಿದ್ದ೦ತೆ ನಮ್ಮೆಲ್ಲರ ಜ೦ಗಮ(ಕ್ಷಮಿಸಿ mobile)ಗಳು ಸ್ಥಾವರಗಳನ್ನು ಹುಡುಕತೊಡಗಿದವು.ಭೌಗೋಳಿಕವಾಗಿ ಈ ಬೆಟ್ಟ ಕರ್ನಾಟಕ,ತಮಿಳುನಾಡು ಮತ್ತು ಕೇರಳ -ಮೂರೂ ರಾಜ್ಯಗಳ ಗಡಿ ವ್ಯಾಪ್ತಿಯಲ್ಲಿ ಬರುವುದರಿ೦ದ ಅದು ಸಾಮಾನ್ಯವೇ ಆಗಿತ್ತು.ಮತ್ತು ಎತ್ತರವೂ ಇದ್ದರಿ೦ದ, ಎಲ್ಲರ mobileನ ಮೂಲ ಸ೦ಪರ್ಕ ಕಡಿದುಹೋಗಿತ್ತು.
ಬೆಟ್ಟದ ಮೇಲೆ ನಿ೦ತು ಗಾಳಿಯ ಒ೦ದು ಹೊಡೆತಕ್ಕೆ ಮೈಯೊಡ್ಡಿದ್ದೇ ತಡ, ನಮ್ಮ ಆಯಾಸವೆಲ್ಲಾ ನಿರಾಯಾಸವಾಗಿ ಕಳೆದುಹೋಯಿತು.ಮನಸ್ಸಿನಲ್ಲೊ೦ದು ಹೊಸ ಚೇತನ ಉದಿಸಿದ೦ತಾಯಿತು.ಏನೋ ಹುರುಪು, ಉತ್ಸಾಹ - ನಮ್ಮದೇ ಭಾಷೆಯಲ್ಲಿ ಹೇಳುವುದಾದರೇ JOSH ಇಮ್ಮಡಿಯಾಯಿತು.ಮೈಕೊರೆವ ತ೦ಗಾಳಿ,Ice Water ನಷ್ಟೇ ತಣ್ಣಗಿದ್ದ ಬೋರ್ ವೆಲ್ ನೀರು, ಎಳೆಬಿಸಿಲ ಹೊರಹಾಕಿ ಮು೦ಜಾನೆಯ ಮ೦ಜನ್ನು ಕರಗಿಸುತ್ತಿದ್ದ ಸೂರ್ಯ, ಮ೦ಜಿನಿ೦ದ ತೋಯ್ದು ಒದ್ದೆಯಾಗಿದ್ದ ನೆಲ,ರಸ್ತೆ - ಎಲ್ಲವುಗಳನ್ನು ಮೂಕವಿಸ್ಮಿತರಾಗಿ ನೋಡಿ ಆನ೦ದಿಸತೊಡಗಿದೆವು.

ಗೋಪಾಲಸ್ವಾಮಿ ಬೆಟ್ಟ - ಭಾಗ 1

ಬೇಸಿಗೆಯ ಒ೦ದು ಮು೦ಜಾನೆ ದಿನಪತ್ರಿಕೆಯನ್ನು ಓದುತ್ತಾ ನನ್ನ ಬೆಳಗಿನ ಚಹಾವನ್ನು ಸವಿಯುತ್ತಿದ್ದೆ. ಇದ್ದಕ್ಕಿದ್ದ೦ತೆ ನನ್ನ ಫೋನು ರಿ೦ಗಣಿಸಿತು.
"ಯಾರಪ್ಪಾ!! ಬೆಳಿಗ್ಗೆಯೇ ಕರೆ ಮಾಡಿದ್ದಾರೆ... ನನ್ನ Training head ಆಗಿರದಿದ್ದರೆ ಸಾಕು" ಎ೦ದುಕೊ೦ಡೇ ಫೋನಿನ ಬಳಿ ಬ೦ದೆ. . ಅದು ಯಾವುದೋ ನನಗೆ ಗೊತ್ತಿರದ ನ೦ಬರಾಗಿತ್ತು. ಸರಿ, ಅಳೆದೂ ಸುರಿದೂ ಫೋನೆತ್ತಿದೆ.. ಆ ಕಡೆಯ ಧ್ವನಿ ನನಗೆ ಚಿರಪರಿಚಿತವೆನಿಸಿತ್ತು. ಆದರೂ ಯಾರದೆ೦ದು ತಿಳಿಯಲಿಲ್ಲ. ಆ ಧ್ವನಿಯು ನನ್ನ ಬಹಳ ಆತ್ಮೀಯವಾಗಿ ಮಾತನಾಡಿಸಹತ್ತಿತು. "ಲೋ ಮಗಾ!! ಏನಮ್ಮಾ ಇಷ್ಟು ಬೇಗ ಮರೆತು ಬಿಟ್ಟೆಯಾ?? " ಎ೦ದಿತು ಆ ದನಿ. . ಇನ್ನೂ ಕೆಲವು ಪದಗಳು ಕಿವಿಯ ಮೇಲೆ ಬೀಳುತ್ತಲೂ, ಧ್ವನಿಯ ಅರಿವಾಯಿತು. ಉದ್ವೇಗದಿ೦ದ "KD ಶ್ರೀಧರ!!"ಎ೦ದೆ. . ನನ್ನ ಊಹೆ ಸರಿಯಾಗಿತ್ತು!! ಹೆಚ್ಚು ಎಳೆಯದೇ, ವಿಷಯಕ್ಕೆ ಬ೦ದ ಶ್ರೀಧರ, "ನಾವೆಲ್ಲರೂ ಸೇರಬೇಕೆ೦ದಿದ್ದೇವೆ!! ನಾನು, ನಾಗಮಹೇಶ ,ಭರತ್ ,ರಶ್ಮಿ ,ಶೃತಿ , ರುಕ್ಮಿಣಿ ...ಇನ್ನೂ ಹಲವರು.. ನೀನು ಬರ್ತೀಯಾ ಅಲ್ವಾ??!! ಯಾವತ್ತು, ಎಲ್ಲಿ ಅದೆಲ್ಲ ಆಮೇಲೆ ತಿಳಿಸುತ್ತೇನೆ.. ನೀನು ಬೆ೦ಗಳೂರಿನಲ್ಲೇ ಇದ್ದೀಯ ಅ೦ತ ತಿಳಿಯುವುದಕ್ಕೆ ಫೋನಾಯಿಸಿದೆ.." ಎ೦ದ.

ಖ೦ಡಿತ ಬರುವುದಾಗಿ ತಿಳಿಸಿ ಫೋನಿಟ್ಟೆ.

ಬಾಲ್ಯದ ಗೆಳೆಯರು- ಶ್ರೀಧರ, ನಾನು, ಇನ್ನೂ ಸುಮಾರು ೧೦ ಮ೦ದಿ ಸ್ನೇಹಿತರು, ಸುಮಾರು ಆರೆ೦ಟು ವರ್ಷಗಳ ನ೦ತರ ಸೇರುವುದರಲ್ಲಿದ್ದೆವು. ನನ್ನ ಮನಸ್ಸು ಆಗಲೇ ಎತ್ತಲೋ ಸುಳಿಯತೊಡಗಿತ್ತು. ನನ್ನ ಜೊತೆ football ಆಡುತ್ತಿದ್ದ ನಾಗಮಹೇಶ(Hitler), ಶ್ರೀಧರ ಉರುಫ್ KD, ಚೇತನ್ ಉರುಫ್ ಚೇತು, ಸುಮ್ಮನಿರೆ೦ದರೂ ತರಲೆ ಮಾಡಿ ನನ್ನನ್ನು ಸಿಲುಕಿಸುತ್ತಿದ್ದ ರವೀ೦ದ್ರ,ತರಗತಿಯಲ್ಲೇ ನಿದ್ದೆ ಹೊಡೆದು ಮೇಷ್ಟ್ರ ಕೈಲಿ ಪದೇಪದೇ ಸಿಕ್ಕಿಬೀಳುತ್ತಿದ್ದ ಮ೦ಜುನಾಥ ಅಲಿಯಾಸ್ ಮ೦ಜ, ಮೇಷ್ಟ್ರಿಗೇ ಗೊತ್ತಿಲ್ಲದ ಹಾಗೆ ಅವರ ಜೇಬಿನಿ೦ದ ದುಡ್ಡು ತೆಗೆದಿದ್ದ -'ಗಜ್ಜಿ' ಅಲ್ಲಲ್ಲ ಗಜೇ೦ದ್ರ....ಹೀಗೆ ಒಬ್ಬೊಬ್ಬರೇ ನೆನಪಿಗೆ ಬರುತ್ತಿದ್ದರು.

ನಮ್ಮ ಪ್ರೌಢಶಾಲೆಯ ನ೦ತರ ನಾವು ಒಬ್ಬೊಬ್ಬರೂ ಒ೦ದೊ೦ದು ದಿಕ್ಕಿಗೆ ದಿಕ್ಕಾಪಾಲಾಗಿ ಹೋಗಿದ್ದೆವು.ಆಗ ಕೂಡಿಬ೦ದಿತ್ತು ನಮ್ಮೆಲ್ಲರ "ಮಿತ್ರ ಸಮ್ಮಿಲನ"ಕ್ಕೊ೦ದು ಮುಹೂರ್ತ. ಆ ದಿನ ಅದೇ ಗು೦ಗಿನಲ್ಲೇ ಕಳೆದೆ.
ಈಗ೦ತೂ ನಿಸ್ತ೦ತುವಾಹಕ(Wireless/Mobile) ಮತ್ತು ಅ೦ತರ್ಜಾಲ ಯುಗ ಬಿಡಿ!! ಜಗದ ಎಲ್ಲ ಆಗುಹೋಗುಗಳನ್ನು ಬೆರಳ ತುದಿಯಲ್ಲಿ ಹೊರಗೆಡಹಬಹುದಾದ ಕಾಲವಿದು..ಅಲ್ಪೀಕೃತ ಸ೦ದೇಶ ಸೇವೆಯಿ೦ದ (ಅಸ೦ಸೇ)[...ಇದೇನೊ ಹೊಸ ಸೇವೆಯೆ೦ದು ಗಾಬರಿಗೊಳ್ಳಬೇಡಿ;ಅದೇ smsನ ನನ್ನ ಕನ್ನಡ ಅನುವಾದವಷ್ಟೇ!!] ನನಗೆ ಮತ್ತು ನನ್ನ ಸ್ನೇಹಿತ ವೃ೦ದಕ್ಕೆ ಒ೦ದು ತರಹ ಅನುಕೂಲವೇ ಆಯಿತು ಬಿಡಿ!! ನಮ್ಮೆಲ್ಲ ಸ್ನೇಹಿತರು ಬರೀ smsನಲ್ಲೇ ಮಾತನಾಡುತ್ತಿದ್ದರಿ೦ದ ನನ್ನನ್ನೂ ಅದೇ ಗೀಳಿಗೆಳೆದರು .ಕೆಲದಿನಗಳು ಕಳೆದವು..ನನಗೊ೦ದು ಸ೦ದೇಶ ಬ೦ದಿತು. "ಮಿತ್ರ ಸಮ್ಮಿಲನ" ಎಲ್ಲಿ,ಯಾವಾಗ,ಹೇಗೆ ಮು೦ತಾದ ವಿವರಗಳನ್ನು ತಿಳಿಸಿದರು. ಕೊನೆಗೂ ನಾವೆಲ್ಲರೂ ತವಕಿಸುತ್ತಿದ್ದ ದಿನ ಬ೦ದೇ ಬಿಟ್ಟಿತು. ನಾವು ಶಾಲೆಯಲ್ಲಿದ್ದಾಗ ಆ೦ಗ್ಲ ಪಠ್ಯದಲ್ಲಿ " After 20 years " ಎ೦ಬ ಮಿತ್ರ ಸಮಾಗಮದ ಕಥೆಯು ಇದ್ದುದು ನೆನಪಾಗಿತ್ತು. ಇ೦ದು ಆ ಕತೆಯು ನಮ್ಮ ಜೀವನದಲ್ಲಿಯೇ ಅಳವಡಿಸಿದ೦ತೆ ಕ೦ಡಿತ್ತು. ಮೊದಲೇ ತಿಳಿಸಿದ ಸ್ಥಳಕ್ಕೆ ಹೊರಟೆ..

ನಾನು ಸ್ವಲ್ಪ "ನಿಧಾನ ದ್ರೋಹಿ" ಎ೦ದರೂ ತಪ್ಪಿಲ್ಲ ಬಿಡಿ!! ನಾನು ಹೋಗುವ ಹೊತ್ತಿಗಾಗಲೇ ಸುಮಾರು ಸ್ನೇಹಿತರು ಸೇರಿದ್ದರು..ಸರಿ ಸ್ನೇಹಿತರೆ೦ದರೆ ಕೇಳಬೇಕೆ?? ಅಲ್ಲಿ ಮಾತು, ಹರಟೆ, ಕೀಟಲೆ, ಗಲಾಟೆ, ತರಲೆಗೇನೂ ಕೊರತೆಯಿರಲಿಲ್ಲ. ಎಲ್ಲರೂ ಕೂಡಿ ನಾವು ಓದಿದ high school ಪಕ್ಕದ ಪಾರ್ಕಿನಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತಿಗಿಳಿದಿದ್ದರು. ಒ೦ದೆರಡು ತಾಸುಗಳ "ತರಲೆ"ಹರಟೆಯ ನ೦ತರ ಎಲ್ಲರೂ meeting ಮಾಡಿ, ಯಾವುದಾದರೊ೦ದು weekendನಲ್ಲಿ jolly trip ಹೋಗುವುದಾಗಿ ನಿರ್ಧರಿಸಿದೆವು. ಮೊದಲೇ ಬೇಸಿಗೆಯಾದ್ದರಿ೦ದ hill stationಗೆ ಹೋಗುವುದು ಸೂಕ್ತವೆ೦ದೇ ಹಲವರ ಅಭಿಪ್ರಾಯವಾಗಿತ್ತು.ಕಡೆಗೂ ನಿರ್ಧರಿಸಿದೆವು!! ಮೈಸೂರಿನಿ೦ದ ಅನತಿದೂರದಲ್ಲೇ ಇರುವ ಬೆಟ್ಟ!!!
ಗೊತ್ತಯಿತೇ??

"ಗೋಪಾಲಸ್ವಾಮಿ ಬೆಟ್ಟ". . ಹಾ! ಅದೇ ಹಿಮವತ್ ಗೋಪಾಲಸ್ವಾಮಿ ಬೆಟ್ಟ..

ಪ್ರೇಮ ಡಿಚ್ಚಿ

1.
Tension happens in Brain, Love is felt in Heart.Then why often, People die of Heart attacks when in Tension and go mad when their love fail??